ಶನಿವಾರ ೨೪ ಜನವರೀ ೨೦೦೯

Farmer...


As the sun set,the birds took flight towards their nest.
Soon after dusk....
A lamp lit up shivering hands
And in the dark shadow,
there appers a wrinkled face..
Of an old farmer. He was once...a young farmer...!
He spent his whole life, ploughing in the fields.
But, now the time has changed him just like a dawn to dusk.
Suddenly, the cold wind biows the lamp with high tide.
And the old farmer begins to tremble just like the flame of lamp.
And in a moment ......
he is fallen with a cry..!

ಮಂಗಳವಾರ ೨೦ ಜನವರೀ ೨೦೦೯

The Creeping Heart


You Stirred my feelings and i was mum,
You came suddenly in my life
And went away like the winter wind.
I decorated my dreams with you
But you left me like a flatForm.
N0w i am quiet, calm as before
God knows best what tipe of feelings
You wanted to rouse in me.....

ಶನಿವಾರ ೧೭ ಜನವರೀ ೨೦೦೯

My Goddess......


Lifeless is driftwood
reached ashore on a sandy beach
Baked on the sand dried to a bone
on a cool evening lovely soft hands piked me up..
Very touch enlivened me to the core
breath so fragrant transformed me to a being.
My creator anew became my goddess of love
Love so sublime no love ever be
Transcends all difinitions yet put forth
Godess held me close to her heart
yet for her it is different
My soul reaches to blur the difference
Yes I wait till eternity...

ಶುಕ್ರವಾರ ೧೬ ಜನವರೀ ೨೦೦೯

ಕಲಾಂಗಣ್.....


ಕಲಾಂಗಣ್ ಎಂದರೆ ಕಲೆಯ ಅಂಗಳ .....ಇಂತಹ ಒಂದು ಸುಂದರ ಸ್ಥಳ ಮಂಗಳೂರಿನ ಶಕ್ತಿನರಗದಲ್ಲಿ ಇದೆ. ಇಲ್ಲಿನ ೧ ಎಕರೆ ಪ್ರದೇಶದಲ್ಲಿ ಮೈ ದೆಳೆದು ನಿಂತಿರುವ ಭವ್ಯ ಕೇಂದ್ರ ಕೊಂಕಣಿ ಭಾಷೆ, ಸಂಸ್ಕ್ರತಿ ಮತ್ತು ಜಾನಪದ ಕಲೆಯನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯುವ ಕಾಯಕದಲ್ಲಿ ನಿರತವಾಗಿದೆ. ೧೯೮೬ ರಲ್ಲಿ ಎರಿಕ್ ಒಜಾರಿಯೋ ಅವರು ಆರಂಭಿಸಿದ ಮಾಂಡ್ ಸೊಭಾಣ್ ಕಾಲ ಕ್ರಮೇಣ ಒಂದು ಚಳವಳಿ ಆಗಿ ರೂಪುಗೊಂಡಿತ್ತು . ಅದರ ಫಲವೇ ಇದು. ನಾಡಿನಾದ್ಯಂತ ಇರುವ ೪೫ ಕೊಂಕಣಿ ಭಾಷಿಗರನ್ನು ಈ ಸಂಸ್ಥೆ ಪ್ರತಿನಿದಿಸುತಿದೆ ಎಂದರೆ ನಂಬುತೀರ..! ಕೊಂಕಣಿ ಭಾಷಾ ಬೆಳವಣಿಗೆಗೆ ಇದು ಕೂಡ ಒಂದು ಸ್ಪೂರ್ತಿ. .. ಕೊಂಕಣಿ ಭಾಷೆ ಕೇವಲ ಕ್ರೈಸ್ತರ ಮತ್ತು ಗೌಡ ಸಾರಸತ್ವ ಬ್ರಾಹಮಣ.. ಸಮುದಾಯದ ಭಾಷೆ ಎಂಬ ಭಾವನೆಯನ್ನು ತೊಡೆದು ಹಾಕಿ ಇತರ ಪಂಗಡಗಳ ನಡುವೆಯೂ ಅನುಷ್ಟಾನ ದಲ್ಲಿ ಇರುವುದನ್ನು ವಿಶ್ವಕ್ಕೆ ಮನವರಿಕೆ ಮಾಡಿ ಕೊಟ್ಟಿದೆ. ಇಲ್ಲಿ ಸುಂದರ ತೆರೆದ ರಂಗ ಮಂದಿರ, ವಸ್ತು ಸಂಗ್ರಹಾಲಯ, ಸಭಾಂಗಣ, ಕೊಂಕಣಿ ಪುಸ್ತಕ ಭಂಡಾರ, ಎಲ್ಲವು ವ್ಯವಸ್ಥಿತವಾಗಿ ಇದೆ. ಇಲ್ಲಿನ ಈ ವೇದಿಕೆ ಇದುವರೆಗೂ ೧೦೦೦ ಕ್ಕೂ ಅದಿಕ ಕಾರ್ಯಕ್ರಮಗಳನ್ನು ನಡೆಸಿದೆ. ಚಿಕ್ಕ ಮಕ್ಕಳಿಗೆ ಸಾಂಸ್ಕ್ರತಿಕ ಶಿಬಿರಗಳು, ನಾಟಕ ತರಬೇತಿ, ಸಂಗೀತ - ನ್ರತ್ಯ ತರಬೇತಿಗಳು, ಕೊಂಕಣಿ ಸಂಸ್ಕ್ರತಿಗೆ ಸಂಬಂದಿಸಿದ ಅಧ್ಯಯಾನ ಮತ್ತು ಸಂಶೋದನೆ ಇತ್ಯಾದಿ ...ಇದೆಲ್ಲದಕ್ಕೂ ಕೀರೀಟ ಪ್ರಾಯವಾಗಿ ೪೮ ಗಂಟೆಗಳ ಕೊಂಕಣಿ ನಿರಂತರಿ ಹಾಡುಗಾರಿಕೆ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಇದೇ ವೇದಿಕೆಯಲ್ಲಿ ಬರೆದಿದೆ. ಕಲಾಂಗಣ್ ಇನ್ನೂ ಒಳ್ಳೆಯ ಕಾರ್ಯಕ್ರಮಗಳನ್ನು ನೀಡುವ ಮುಖಾಂತರ ಕೊಂಕಣಿ ಭಾಷಿಕರ ಮದ್ಯೆ ಬೆಳೆಯಲಿ ಎಂದು ಹಾರೈಸೋಣ.....

ಗುರುವಾರ ೮ ಜನವರೀ ೨೦೦೯

ಓದಿದ ನೆನಪು..... ಮಂದಿರ - ಮಸೀದಿ



ಕಾಲ್ತೊಳೆದು ಹೊಕ್ಕ ಮಸೀದಿ
ಕೈ ಮುಗಿದು ನಿಂತ ಮಂದಿರ
ಇಲ್ಲಿ ತೊಟ್ಟಿಕ್ಕುತಿದೆ ಬಿಸಿಬಿಸಿ ನೆತ್ತರ !
ಅಕ್ಷಯ ವಾಗುತಿದೆ, ದಿನ ದಿನವು ಸಮರ...
ಜಗವೆಲ್ಲ ಮಲಗಿರಲು ಎದ್ದ ಆ ಬುದ್ದ
ಕತ್ತಲಲ್ಲಿ ಕಂಡಿಲ್ಲ ಯಶೋಧರೆ ರಾಹುಲರ..
ಇತಿಹಾಸ ಊರಿದ ಕತ್ತಲೆಯ ಕಳಚಿ..
ಹನಿ ಹನಿಯ ನೆತ್ತರನ್ನು ಒರೆಸಿ.
ಒಡಲ ಕಂದಕವ ಮುಚ್ಚಿ
ಮಸಿದಿ ಮಂದಿರದ ಕದ ಮುಚ್ಚಿ
ಎದೆ ಕದವ ತೆರೆದು ಬಿಡಿ...
ಕಾಲ್ತೊಳೆದು ಒಳ ಬನ್ನಿ
ಹ್ರದಯ ಮಸೀದಿಗೆ..
ಹೊತ್ತಿಸಿಡಿ ಕಿರು ಹಣತೆ
ಅಲ್ಲಿ ಆ ಮಂದಿರದೆ...






ಬುಧವಾರ ೭ ಜನವರೀ ೨೦೦೯

ದಕ್ಷಿಣ ಕನ್ನಡ ಜಿಲ್ಲೆಯ ಒಂದು ಗ್ರಾಮ ಇರಾ. ತೀರ ಹಿಂದುಳಿದ ಈ ಪುಟ್ಟ ಗ್ರಾಮ ಇಂದು ಜಾಗತಿಕ ನಕ್ಷೆಯಲ್ಲಿ ಸ್ಥಾನ ಪಡೆದಿದೆ. ಇದಕ್ಕೆ ಕಾರಣ ಇಲ್ಲಿ ಆರಂಬವಾದ ಸ್ವಚ್ಛತೆ , ಅಂದೋಲನದ ರೂಪ ಪಡೆದು ಜಿಲ್ಲೆಯ ಸ್ವಚ್ಛತ ಕ್ರಾಂತಿಗೆ ನಾಂದಿ ಹಾಡಿತು. ಇರಾ ಗ್ರಾಮದ ಸ್ವಚ್ಚತೆ , ಇಲ್ಲಿನ ಜನರ ಪರಿಸರ ಪ್ರೇಮ ಕಣ್ಣಾರೆ ನೋಡಬೇಕಾದರೆ ಒಮ್ಮೆ ನೀವು ಇಲ್ಲಿ ಭೇಟಿ ಕೊಡಲೇ ಬೇಕು. ಈ ಪುಟ್ಟ ಊರಿಗೆ ದೇಶ ವಿದೇಶಗಳಿಂದ ಅನೇಕರು ಬಂದು ಹೋಗಿದ್ದು ಮಾತ್ರವಲ್ಲ, ಇಲ್ಲಿನ ಕಾರ್ಯ ಚಟುವಟಿಕೆಗಳನ್ನು ಸಮಗ್ರವಾಗಿ ಅದ್ಯಯನ ಮಾಡಿ ಅವರ ಊರುಗಳಲ್ಲೂ ಅಳವಡಿಸಿಕೊಂಡಿದ್ದು ಯಶಸ್ಸನ್ನು ಕಂಡುಕೊಂಡಿದ್ದಾರೆ. ಹಲವು ವಿಷಯಗಳಲ್ಲಿ ಇರಾ ಉಳಿದವರಿಗಿಂತ ಮುಂದೆ ಇದೆ. ಇಲ್ಲಿಯ ಗ್ರಾಮದ ಸ್ವಚ್ಚತೆ, ಪ್ಲಾಸ್ಟಿಕ್ ಮುಕ್ತ, ಸಾವಯವ ಗೊಬ್ಬರ ಬಳಕೆ, ಗ್ರಾಮ ಮಾಹಿತಿ ಮತ್ತು ವಾಚನ ಕೇಂದ್ರ, ಮರ ಗಿಡಗಳನ್ನು ಬೆಳೆಸುವ ಮೂಲಕ ಹಸಿರು ಕ್ರಾಂತಿ ಮತ್ತು ಇನ್ನು ಏನೇನೋ .... ಅಬ್ಬಾ ಏನು ಇದೆ ಏನು ಇಲ್ಲ ಈ ಪುಟ್ಟ ಗ್ರಾಮದಲ್ಲಿ ,ಇದೀಗ ವ್ಯಾಜ್ಯ ಮುಕ್ತ ಗ್ರಾಮವನ್ನಗಿರಿಸುವಲ್ಲಿ ದಾಪುಗಾಲು ಹಾಕುತಿದ್ದು, ಇನ್ನು ಒಂದು ಹೆಜ್ಜೆ ಮುಂದೆ ಹೋಗಿv ಇಲ್ಲಿನ ಯಾವುದೇ ಸಂಶಯ ಆಗುದರಲ್ಲಿಸಂಶಯ ಇಲ್ಲ ಆದರೆ ಚಲಾ ಬೇಕು ಅಷ್ಟೆ ಆದರೆ. ಈ ಎಲ್ಲ ಕ್ರಾಂತಿಕಾರಿ ಹೆಜ್ಜೆಗಳಿಗೆ ಕಾರಣ ಇಲ್ಲಿನ ಇಲ್ಲಿನ ಗ್ರಾಮಸ್ತರು. ಇಲ್ಲಿನ ಶಾಲೆಯ ಪುಟ್ಟ ಮಕ್ಕಳಿಂದ ಹಿಡಿದು ಗ್ರಾಮ ಪಂಚಾಯತ್ ಸದಸ್ಯರುಇರಾ ಗ್ರಾಮ ಸೇರಿದಂತೆ ಜಿಲ್ಲೆಯ ಸ್ವಚ್ಚತಾ ಅಂದೋಲನದ ಯಶಸ್ಸಿಗೆ ಜಿಲ್ಲೆಯ ಮಾದ್ಯಮಗಳ ಪಾತ್ರವು ದೊಡ್ಡದು. ಹೆಚ್ಚಾಗಿ ಎಲ್ಲ ಪ್ರಿಂಟ್ ಮತ್ತು ಎಲೆಕ್ರೋನಿಕ್ಸ್ ಮಾದ್ಯಮಗಳು ಈ ನಿಟ್ಟಿನಲ್ಲಿ ಹೆಚ್ಚು ಮುತುವರ್ಜಿ ವಹಿಸಿ ಕೆಲಸ ಮಾಡಿವೆ. ಇರಾ ಗ್ರಾಮದಂತೆ ಎಲ್ಲರು ಒಟ್ಟಾಗಿ ಕೆಲಸ ಮಾಡಿದರೆ ಗಾಂಧಿಜಿ ಕಂಡಂತೆ ಗ್ರಾಮ ರಾಜ್ಯ ರಾಮ ರಾಜ್ಯ ಆಗುದರಲ್ಲಿ ಯಾವುದೇ ಸಂಶಯ ಇಲ್ಲ. ಆದರೆ ಛಲ ಬೇಕು ಅಷ್ಟೆ...

ಗುರುವಾರ ೧ ಜನವರೀ ೨೦೦೯

ಟಿವಿ ಜರ್ನಲಿಸಂ


ಹಾಗೆ ಸುಮ್ಮನೆ :
ಈಗಿನ ಯುಗ ಎಲೆಕ್ಟ್ರಾನಿಕ್ . ಎಲ್ಲಿ ನೋಡಿದರು ಟೆಲಿವಿಷನ್ ನದ್ದೇ ಕಾರುಬಾರು !...ಹಳ್ಳಿಯಿಂದ ಡೆಲ್ಲಿ ತನಕ ಪ್ರತಿ ಮನೆಯಲ್ಲೂ ಬೆಳಗ್ಗಿನ ಉಪಹಾರದಿಂದ ಆರಂಭವಾಗಿ ರಾತ್ರಿಯ ಊಟ ನಡೆಯೋದು ಟಿವಿ ಮುಂದೇನೆ... ಟೆಲಿವಿಷನ್ನಲ್ಲೂ ಒಂದು ಕಡೆ ದಾರವಾಹಿಗಳದರೆ ಇನ್ನೊಂದು ಕಡೆ ಬ್ರೇಕಿಂಗ್ ನ್ಯೂಸ್ ಕೊಡುವ ಸುದ್ದಿ ಪ್ರಸಾರ ಮಾಡುವ ಚಾನಲ್ಲುಗಳ ಭರಾಟೆ.... ಈಗಿನ ಕಾಲ ನ್ಯೂಸ್ ಚಾನಲ್ಲಿನ ಕಾಲ ಎಂದು ಹೇಳಿದರೆ ತಪ್ಪಾಗಲಾರದು .ಮೊನ್ನೆ ನಡೆದ ರಾಜ್ಯ ವಿದಾನ ಸಭೆಯ ೮ ಸೀಟುಗಳ ಫಲಿತಾಂಶ ಕೊಡುವ ದಾವಂತ ನೋಡಿದ ನಿಮಗೆ ಇದರ ಮಹತ್ವ ಎಷ್ಟು ಎ೦ಬುದು ಖಂಡಿತ ಗೊತ್ಹಿದೆ. ಇದರಲ್ಲಿ ಟಿವಿ ಜರ್ನಲಿಸ್ಟ್ ಗೆ ಪ್ರಮುಖ ಸ್ಥಾನ. ದಿನದ ೨೪ ಗಂಟೆ ಕೆಲಸ ಮಾಡುವ ಛಲ ಅವನಲ್ಲಿ ಇದ್ದರೆ ಮಾತ್ರ ಇದು ಸಾದ್ಯ. ನಾನು ಕಳೆದ ೧೦ ವರ್ಷಗಳಿಂದ ಈ ವ್ರತ್ತಿಯಲ್ಲಿ ಇದ್ದೇನೆ. ಇದರಲ್ಲಿ ಇರಲು ಮುಖ್ಯವಾದ ೭ ಕಾರಣಗಳಿವೆ.
೧. ನನಗೆ ನಿದ್ದೆ ಮಾಡುದು ಇಷ್ಟ ಇಲ್ಲ !
೨. ಬದುಕನ್ನು ಬಾಲ್ಯದಲ್ಲೇ ಎಂಜಾಯ್ ಮಾಡಿದ್ದೇನೆ !
೩. ನನ್ನ ಮೇಲೆ ನನಗೆ ಸೇಡು ತೀರಿಸಿ ಕೊಳ್ಳಬೇಕಿದೆ !
೪. ನನ್ನ ಆತ್ಮಿಯ ಗೆಳೆಯರಿಂದ ಮತ್ತು ಮನೆಯವರಿಂದ ನನಗೆ ದೂರ ಆಗಬೇಕಿದೆ !
೫. ನನಗೆ ಸಮಾಜಿಕ ಬಹಿಷ್ಕಾರ ಇಷ್ಟ !
೬. ನನಗೆ ರಜೆ ಯಲ್ಲೂ ಕೆಲಸ ಮಾಡುದು ತುಂಬಾ ಇಷ್ಟ !
೭. ಕಿರಿ ಕಿರಿಯ ಕೌಟುಂಬಿಕ ಬದುಕು ತುಂಬಾ ಇಷ್ಟ !